ಪ್ರಿಯ ಪರಶಿವಮೂರ್ತಿ ಅವರಿಗೆ,
ವಂದನೆಗಳು.
ನೀವು ವಿಶ್ವಾಸದಿಂದ ಕಳುಹಿಸಿದ ‘ಗೆರೆ ದಾಟಿದ ಮೇಲೆ’ ಪುಸ್ತಕದ ಪ್ರತಿ ತಲುಪಿದೆ.
ಇದೊಂದು ಅತ್ಯಂತ ಪ್ರಾಮಾಣಿಕ ಹಾಗೂ ವಾಚನೀಯ ಕೃತಿ.
ಆತ್ಮಕಥನ ಕಠಿನವಾದ ಸಾಹಿತ್ಯ ಪ್ರಕಾರ. ಆಳವಾದ ಆತ್ಮಪರೀಕ್ಷೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ.
ಇಂಥ ಪರೀಕ್ಷೆಗೆ ಧೈರ್ಯ ಬೇಕು. ಇದು ನಿಮ್ಮಲಿದೆಯೆಂದೇ ಈ ಕೃತಿ ಹೊರಬಂದಿದೆ.
ಅಭಿನಂದನೆಗಳು
ವಿಶ್ವಾಸದಿಂದ
-ಜಿ.ಎಸ್.ಅಮೂರ.
ಧಾರವಾಡ
(9-7-2010)
|